ಪೋಸ್ಟ್‌ಗಳು

ಎಂಟರ ನಂಟು

ಇಮೇಜ್
ಎಂಟರ ನಂಟು  1974-75 ರ ಡಿಸೆಂಬರ್ ತಿಂಗಳು   ನಮ್ಮಮಂಗಳೂರಿನ   ಗೋರಿಗುಡ್ಡದ ಫಿಶರೀಸ್  ಕಾಲೇಜಿನ ಹುಡುಗ್ರಿಗೂ  ಕೊಡಿಯಾಲ್ ಬೈಲ್ ನ  ಸೈನ್ಟ್ ಅಲಾಯ್ಶಿಯಸ್  ಕಾಲೇಜಿನ  ಹುಡುಗ್ರಿಗೂ  ಅಷ್ಟಕ್ಕಷ್ಟೇ, ಆಗಾಗ ಸಣ್ಣ ಪುಟ್ಟ  ಜಗಳ  ಆಗಿದ್ದೂ ಉಂಟು,  ಆದ್ರೆ,  ಇಬ್ಬರನ್ನೂ  ಆಕರ್ಷಸಿತ್ತಿದ್ದದ್ದು  ಮತ್ತೆ ವೈಮನಸ್ಯತೆಗೆ  ಕಾರಣವಾಗಿದ್ದು ಕಂಕನಾಡಿಯ  ಸೈನ್ಟ್ ಎಗ್ನೇಸ್ ವಿಮೆನ್ಸ್ ಕಾಲೇಜಿನ  ವಿದ್ಯಾರ್ಥಿನಿಯರು  ಬೆಡಗಿನ ಯುವತಿಯರು ಇಬ್ಬರೂ ಅರಸಿ ಹೋಗುತ್ತಿದ್ದ  ಮತ್ತೊಂದು ಕೇಂದ್ರವೆಂದ್ರೆ ಅದು  ಮಂಗಳೂರ ವೆಲೆಂನ್ಸಿಯಾದಲ್ಲಿದ್ದ  ರೋಶಿನಿ ನಿಲಯ.  ಕಾಲೇಜು ಹುಡುಗ್ರು  ಯಾಕ್ ಅಲ್ಲಿಗೆ  ಹೋಗ್ ತಿದ್ರೂ ಅನ್ನೋದು  ಎಲ್ರಿಗೂ ಗೊತ್ತಿದ್ದ ವಿಷಯ  ಕ್ರಿಸ್ಮಸ್ ಗೆ ಸರಿಯಾಗಿ  ಒಂದು ವಾರದ ಮುಂಚೆ  ಅಂದ್ರೆ ಡಿಸೆಂಬರ್ 17ನೇ ತಾರೀಕು  ರೋಶನಿ ನಿಲಯದಲ್ಲಿ ಮ್ಯೂಸಿಕ್  ಫೆಸ್ಟಿವಲ್ ನಡಿಯುತ್ತಿತ್ತು. ನಾವೂ ಹೋಗಿದ್ವಿ  ನಾವೂ ಅಂದ್ರೆ ನಾನು, ವೆಂಕಿ  ಅಶ್ವಥ್,  ಮಂಜು, ಕೊಂಡಾ,ಮತ್ತಿತರರು  ತಂಬೋಲಾ, ಹೌಸಿ ಹೌಸಿ ಜರುಗಿತ್ತು  ಅದ್ರಷ್ಟವ ಅಳೆಯಲು  10 ರೂಪಾಯಿ ಟಿಕೆಟ್  ತೆಕ್ಕೊಂಡಿದ್ವಿ. ಮೈಕ್ ಹಿಡಿದು...

avasheshagalu

ಬೆಂಗಳೂರು- ತಾಳಗುಪ್ಪ ಎಕ್ಸ್ ಪ್ರೆಸ್  ಮುಂಜಾನೆ 7:30ಕ್ಕೆ ತಾಳಗುಪ್ಪ ರೈಲ್ವೆ ಸ್ಟೇಷನ್ ತಲುಪಿತು. ರೈಲು ಗಾಡಿಯಿಂದ ಇಳಿದ ಪ್ರಭಾಶಂಕರ್,ವಿನುತಾ,  ಹೊರಬಂದು, ತಾಳಗುಪ್ಪ ದಿಂದ ಜೋಗ್ ಫಾಲ್ಸ್ ಗೆ ಹೋಗುವ BRKMS ಬಸ್ಸು ಹತ್ತಿದರು. ಶಿವಮೊಗ್ಗ-ಹೊನ್ನಾವರ ರಾಜ್ಯ ಹೆದ್ದಾರಿಯ ಹಿಡಿದು ಬಚ್ ಗಾರ್ ಘಾಟಿ  ಗಣೇಶಂಗೆ ಕೈ ಮುಗಿದು, ಕಾರ್ಗಲ್ ದಾಟಿ ಅರ್ಧ ಕಿಲೋಮೀಟರ್ ಪಯಣಿಸಿದರೆ, ಒಂಟಿ ಮನೆ ಸರ್ಕಲ್, ಬಂತೂಂತ ಕಂಡಕ್ಟರ್ ಹೇಳ್ದಾಗ, ನಿಂತ ಬಸ್ಸಿಂದ ಪ್ರಭಾ ಶಂಕರ್ ಮತ್ತೆ  ವಿನುತ ಇಳಿದರು. ಇಳಿದು ಬಂದ  ವಿನುತಳ ಕಿವಿಯಲ್ಲಿ ಏನೋ ಹೇಳಿದ,  ಕುಳಕ್ ಅಂತ ಆಕೆ ನಕ್ಕಳು.    ಕೈ ಗಡಿಗಾರವ ನೋಡಿದ  ಬೆಳಗ್ಗೆ ಹತ್ತಾಗಿತ್ತು. ಎಷ್ಟೆಲ್ಲಾ ಕಷ್ಟ ಪಟ್ಟು ಓದಿ  ಇನ್ಕಮ್ ಟ್ಯಾಕ್ಸ್ ಆಫೀಸರ್ ಆದ್ರೂವೆ, ಇನ್ನೂ ಊರಲ್ಲಿರೋರು ಒಂಟಿ ಮನೆ ಪ್ರಭಾ ಶಂಕರ್ ಅಂತ ಕರೀತಾ ಇದ್ದಿದ್ದು ಅವನ ಹೆಸರೊಟ್ಟಿಗೆ ಒಂಟಿ ಮನೆ ಅಂಟಿಕೊಂಡಿದ್ದು, ಒಂದು ತರಹ ವಿಡಂಬನೆ. ಒಮ್ಮೆಸುತ್ತ ಮುತ್ತ ನೋಡಿದ, ಕವಲು ದಾರಿ, ಜೋಗದ ಜಲಪಾತಕ್ಕೆ ಕರೆದೊಯ್ಯುವ ರಸ್ತೆ ಒಂದಾದರೆ, ಇನ್ನೊಂದು ರಸ್ತೆ  ವೊಡನ್ ಬೈಲು ಸುರಂಗದ ಕಾಲುವೆಗೆ ಕರೆದೊಯ್ಯುವ ರಸ್ತೆ ಯಾಗಿತ್ತು. ಈ ಎರಡು ರಸ್ತೆಗಳು ಬೇರೆ ಬೇರೆಯಾಗುವ ವ್ರತ್ತದ ಎದುರಿಗೇ ಸ್ವಲ್ಪ ಎತ್ತರದಲ್ಲಿ ಇತ್ತು, ಆ ಒಂಟಿ ಮನೆ. ಫಾರೆಸ್ಟ್ ಜಮೀನಿನಲ್ಲಿ   ಆ ಮನೆ ಕಟ್ಟಿದಾಗ...

ಈ ಪ್ರಯಾಣಕ್ಕೆಲ್ಲಿದೆ ಅಂತ?

ಇಮೇಜ್
ಬಹಳ ದಿನಗಳಿಂದ ಹುಡುಕ್ತಾ ಇದ್ದೀನಿ ಸಿಗಲೇ ಇಲ್ಲಾ   ಪುಸ್ತಕದ ಕಪಾಟು, ಅಲಮಾರಿ,  ಸ್ಟೋರ್ ರೂಮ್, ಕಾರ್ಟನ್ ಡಬ್ಬಾ  ಎಲ್ಲವನ್ನು ತಲೆಕೆಳಗೆ ಮಾಡಿ ಉರುಳಿಸಿ ಬೀಳಿಸಿ ಹುಡುಕಿ ಹುಡುಕಿ ಸುಸ್ತಾಗಿದ್ದಾಯ್ತು ನನಗೆ ಒಂದು ಸಂಶಯ  ಹಳೆಯ ಪೇಪರ್ ಮಾರೋ ಕಬಾಡಿಗೇನಾದ್ರೂ ಹಾಕಿದ್ಲೋ ಏನೋಂತ ಆದ್ರೆ ಕೇಳೋದಿಕ್ಕೆ ಧೈರ್ಯ ಬರಲಿಲ್ಲಾ ನಾಜೂಕಾಗಿ ಪತ್ನಿ ಗೀತಾಳನ್ನ ಕೇಳಿದೆ  ಹಸಿರು ಬಣ್ಣದ ಈಗಲ್ ಡೈರಿ ಪೊಲೀಸ್ ಹೆಡ್ ಕಾನ್ಸ್ಟೇಬಲ್  ತಿಮ್ಮಪ್ಪ ರವರ ವಿಳಾಸವ ಬರೆದಿಟ್ಟಿದ್ದೆ ಆ ಡೈರಿ ಎಲ್ಲಾದ್ರೂ ನೋಡಿದ್ಯಾ? ಎಲ್ ಹೊಯ್ತೋಂತ  ಗೊತ್ತಿಲ್ಲಾ ನೋಡಿಲ್ಲವಲ್ರೀ... H C ತಿಮ್ಮಪ್ಪನ ಹುಡುಕಲು ಆ ತಿರುಪತಿ ತಿಮ್ಮಪ್ಪನೇ ದಾರಿ ತೋರಿಸ ಬೇಕು... ಸೇವೆಯಲ್ಲಿದ್ದಾಗಲೇ  ಅವರನ್ನ ನೋಡಬೇಕೂಂತ  ಅಂದುಕೊಂಡಿದ್ದೆ ಅದು ಸಾಧ್ಯವಾಗಲಿಲ್ಲ ಹತಾಶನಾಗಲಿಲ್ಲ ವಿಕ್ರಮಾದಿತ್ಯನ ತರಹ ಬಿಡದೆ ಹೆಡ್ ಕಾನ್ಸ್ಟೇಬಲ್ ತಿಮ್ಮಪ್ಪನವರ ಅನ್ವೇಷಣೆ ಜಾರಿ ಇಟ್ಟಿದ್ದೆ. ಸೇವಾ ನಿವೃತ್ತನಾದ ಮೇಲೆ ಮಾಡಲೇ ಬೇಕೆಂದು ಕೊಂಡ  ಕೆಲವೊಂದು ಕಾರ್ಯಗಳು ಮತ್ತೆ  ನೋಡಲೇ ಬೇಕೆಂದು ಕೊಂಡ ಪರ್ಯಟನೆಯ ಸ್ಥಳಗಳು ಹಾಗೆಯೇ ಭೇಟಿಯಾಗಲೇ  ಬೇಕೆಂದು ಕೊಂಡವರ ಸೂಚಿಯೊಂದು  ತಯಾರು ಮಾಡಿಟ್ಟಿದ್ದೆ,  ಭೇಟಿ ಮಾಡ ಬೇಕಾದವರ ಆ ಲಿಸ್ಟ್ ನಲ್ಲಿ ತಿಮ್ಮಪ್ಪ ರವರ ಹೆಸರು ಮೊದಲನೆಯದಾಗಿತ್ತು ಸರಿ ಅವರ ವಿಳಾಸ ಇಲ್ಲದಿದ್ದರಿಂದ...

Tribute to Ashwath

ಇಮೇಜ್
        (N.Ashwath Narayan Reddy (October 15 1954 to November 13-2025) Thinking of Ashoo  brings a swell of tears  to the eyes and  a tight knot to the throat. It is hard to accept that someone so full of life  is no longer among us.  He had simply joined  his friends for a morning walk  on 13th November 2025,  when he collapsed and succumbed to  heart attack, leaving all of us stunned  and heartbroken.  I have long wished  to write about Ashoo  how we lost a Fisheries Scientist and gained an Expert Banker, but Didn't imagine it to be an Obituary tribute. N. Ashwath Narayan Reddy Whom we used to call Ashoo My close friend, with whom  I have shared more than fifty years of companionship.  Our journey began as classmates in college and continued as batchmates in the Agricultural Research Service. Later, we worked together as colleagues in a research institute in the distant Stat...

ಅಶ್ರು ಪೂರಿತ ಶ್ರದ್ದಾಂಜಲಿ ನಮ್ ಅಶೂಗೆ

ಇಮೇಜ್
ಅಶೂ ಅನ್ನೋ  ಅಶ್ವಥ್ ನ ಬಗ್ಗೆ ಯೋಚಿಸಿದ್ರೇನೇ  ದುಃಖ ಉಮ್ಮಳಿಸಿ ಕೊಂಡುಬರುತ್ತೆ.  ನಿನ್ನೆ ಘಂಟೆಗಟ್ಲೆ ಮಾತಾಡ್ದೋನು (ನೋಡಿ ನಮ್ ಜೊತೆ ಫೋನಿನಲ್ಲಿ ಮಾತಾಡೋಕೇಂತ  ಮಹಡಿಯಲ್ಲಿ ಸೆಪರೇಟ್ ರೂಮ್ ಕಟ್ಟಿಟ್ಟಿದ್ದ) ಇವತ್ತು ಇಲ್ಲಾಂ ತಂದ್ರೆ... ದುಃಖ ಎದೆ ತುಂಬಿ  ಮಾತೇ ಹೊರಬರದು,   ಅನನ್ಯ, ಆತ್ಮೀಯನ ಕಳೆದುಕೊಂಡ ಕಸಿವಿಸಿ. ಏನೋ ಒಂದುತರಹ ಭ್ರಮೆ, ಕೊನೆಗೆ ಶೂನ್ಯ. ಶೂನ್ಯತೆ... ಇವತ್ತು  ನವೆಂಬರ್ ಇಪ್ಪತ್ತೇಳು ಸಂಜೆ 4:15 ಕ್ಕೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ಫ್ಲೈಟ್ ನಲ್ಲಿ ಅಶ್ವಥ್ ಮತ್ತೆ ಸುಜಾತಾ ರವರೊಟ್ಟಿಗೆ ನಾನೂ ಟಿಕೆಟ್ ಮಾಡಿಟ್ಟಿದ್ದೆ ಏರ್ ಪೋರ್ಟ್ನಲ್ಲಿ  ಲಾಸ್ಟ್ ಕಾಲ್ ಫಾರ್ ಮಿಸ್ಟರ್ ಅಶ್ವಥ್ ನಾರಾಯಣ್ ರೆಡ್ಡಿ ಅಂದಾಗ ಮನಸ್ಸು ಚುರುಕ್ ಅಂತು. ಪಯಣಕ್ಕೆ ಮುಂಚೆನೇ ಅಕಸ್ಮಾತ್ತಾಗಿ  ಅಶೂ ನಮ್ಮನ್ನೆಲ್ಲಾ ಅಗಲಿ ಹೋದ. ಇಹಲೋಕದ ಟಿಕೆಟ್ ಇನ್ನೂ ಜೀವಂತವಾಗಿತ್ತು.. ಕೊನೆಗೂ ದುಃಖ ತುಂಬಿದ ಹೃದಯದಿಂದ ಅವರಿಲ್ಲದೆ  ನಾನು ಮಂಗಳೂರಿಗೆ ಹೊರಡಲು ಅನುವಾದೆ. ಮಂಗಳೂರಲ್ಲಿ ನವೆಂಬರ್ 28ಕ್ಕೆ ಫಿಶರೀಸ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ COFAA ದ್ವಾರ  ಆಯೋಜಿಸಿದ್ದ ಕಾಲೇಜು Reunion ಸಮಾರಂಭ. ಅದರಲ್ಲೂ BFSc.. ಯ 1975ರಲ್ಲಿ ಪದವೀಧರರಾದ ನಮಗೆ ಈ ವರ್ಷ ಅಂದರೆ 2025ರಲ್ಲಿ   50ವರ್ಷಗಳು ತುಂಬಿದ್ದರಿಂದ ನ...

ಮಂಜು. ಮಂಜು.. ಓ ಮಂಜೂ...

ಇಮೇಜ್
ಮಂಜು. ಮಂಜು.. ಓ ಮಂಜೂ ಚೆನ್ನೈ ನಲ್ಲಿ ಒಂದು ಸಂಜೆ.. ನನ್ ಕೈಲಿದ್ದ ಸೆಲ್ ಫೋನ್ ನಲ್ಲಿ  ಯು ಟ್ಯೂಬ್ ನೋಡ್ತಾ ಕೇಳ್ತಾ  ಉತ್ತರ ಕ್ಯಾಲಿಫೋರ್ನಿಯದ   ಕನ್ನಡ ಒಕ್ಕೂಟ ಆಯೋಜಿಸಿದ್ದ ಮೈಸೂರು ಅನಂತಸ್ವಾಮಿಯವರ  ಹಳೆಯ ಸಂಗೀತ ಕಚೇರಿಯ ವಿಡಿಯೋ  ಹಾಡು ಹಿತವಾಗಿ ಸೋಂಕಲು ಆ ಹಾಡಿನ ಜೊತೆ ನಾನೂ ಹಾಡುತ್ತಾ..  ಭೂಮಿನ್  ತಬ್ಬಿದ್ ಮೋಡ್ ಇದ್ದಂಗೇ  ಬೆಳ್ಳಿ ಬಳಿದಿದ್ ರೋಡ್ ಇದ್ದಂಗೇ ಸಾಫಾಗ್ ಹಳ್ಳ ತಿಟ್ಟಿಲ್ದಂಗೇ ಮಡಿಕೇರಿ ಮೇಲ್ ಮಂಜು ಮಂಜು,... ಓ ಮಂಜೂಂತ ಗುಣುಗುತ್ತಾ ಗುಣುಗುತ್ತಾ... ಮೆಲಕು ಹಾಕಲು ಪ್ರೆರೇಪಿಸಿತು.. ಸುಮಾರು ಐವತ್ತು ವರ್ಷಗಳ ಹಿಂದೆ ಹಾಡಿದ ಈ ಹಾಡು ನೆನಪಿನ ಸರಪಳಿಯ...ಕಳಚಿಕೊಂಡು ಅಂದ್ರೆ 1973-74 ರ ಸೆಪ್ಟೆಂಬರ್ ತಿಂಗಳಿರಬೇಕು, ಮಂಗಳೂರಿನ ಫಿಷರೀಸ್ ಕಾಲೇಜ್ ಗೆ ಕರೆದೊಯ್ತು ಮ್ಯೂಸಿಕ್  ಕಾಂಪಿಟಿಷನ್, ಅಂದ್ರೆ ಇದ್ದದ್ದರಲ್ಲೇ ದೊಡ್ಡ  ಕ್ಲಾಸ್ ರೂಮೇ ಸಭಾಗ್ರಹ ಕಾಲೇಜ್ ಸ್ಟೂಡೆಂಟ್ಸ್ ಗಳೇ ಹಾಡು ಕೇಳೋ ಶೋತ್ರಗಳು ಪ್ರೊಫೆಸರ್ ಗಳೇ ಜಡ್ಜ್ ಗಳು ಮಡಿಕೇರಿ ಮೇಲ್ ಮಂಜು ಮಂಜು,ಮಂಜು... ಓ ಮಂಜು... ಮೈಕ್ ಮುಂದೆ ಹಾಡ್ತಾ ಇರೋ ಮುಖ್ಯ ಗಾಯಕ ಹಾಡಿಗೆ ತಕ್ಕ ಹಾಗೆ  ಮಂಜು ಅನ್ನೋ ಗಾನಕೋಗಿಲೆ  ನಮ್ಮ ಮಂಜುನಾಥ್.  ಕೋರಸ್ ನಲ್ಲಿ ನಾವೆಲ್ಲಾ ಜೊತೆಯಲ್ಲಿ  ಮಂಜು ಮಂಜೂಂತ ಧ್ವನಿ ಗೂಡಿಸಬೇಕು  ಅಷ್ಟೇ ನಮ್ಮ ಪಾತ್ರ,  ಒಬ್ಬೊಬ್ಬರೇ...